Thursday, December 30, 2010

ಪ್ರಾರ್ಥನೆ - ಭಾಗ 1

Prayer (Google Image)
'ಪ್ರಾರ್ಥನೆ' - ಹಾಗೆಂದರೇನು?!

ಮದುವೆಯಾದ ಕೂಡಲೇ 'ಪ್ರಾರ್ಥನೆ' ಮಾಡುವುದು ನನಗೆ ಅನಿವಾರ್ಯವಾಗಿದೆಯೇನೋ ಎಂದುಕೊಂಡಿರ? ಹಾಗೇನಿಲ್ಲ ಬಿಡಿ. ಬಹು ದಿನಗಳಿಂದ ಪ್ರಾರ್ಥನೆಯ ಬಗ್ಗೆ  ಬರೆಯಬೇಕೆಂಬ ಹಂಬಲವಿದ್ದಿತು. ಈ ಲೇಖನವನ್ನು ಬರೆಯಲು ಪ್ರಾರಂಭಿಸಿ ಇಂದಿಗೆ ಸುಮಾರು ಹತ್ತು ದಿನಗಳೇ ಕಳೆದುಹೋಗಿವೆ; ಆದರೆ ಬರವಣಿಗೆಯಿನ್ನೂ ಪೂರ್ಣವಾಗಿಲ್ಲ. ಇದುವೇ 'SOME-ಸಾರ' ಸಾಗರ!!

ವಿಷಯಕ್ಕೆ ಬರುತ್ತೇನೆ.

ಪ್ರಾರ್ಥನೆ - ಬೇರೆ ಬೇರೆ ಧರ್ಮಗ್ರಂಥಗಳಲ್ಲಿ ಬೇರೆ ಬೇರೆ ರೀತಿಯಾಗಿ ವ್ಯಾಖ್ಯಾನಗೊಂಡಿದೆ. ಆದರೆ, ಎಲ್ಲ ವ್ಯಾಖ್ಯಾನಗಳ ಸಾರ ಒಂದೇ - 'ಭಗವಂತನ ಜೊತೆಗಿನ ನಮ್ಮ ನೇರ ಸಂವಹನವೇ ಪ್ರಾರ್ಥನೆ'. ವಾಸ್ತವಕ್ಕೆ ತೀರ ಹತ್ತಿರವಾಗಿ ಹೇಳಬೇಕೆಂದರೆ, 'ಪ್ರಾರ್ಥನೆ, ಭಗವಂತನ ಮೊಬೈಲ್ ಸಂಖ್ಯೆ'! - ಇದು ನನ್ನ ಸ್ವಂತ ವಿಚಾರವಲ್ಲ, ಎಲ್ಲೋ ಓದಿದ್ದನ್ನು ನೆನಪಿಸಿಕೊಂಡು ಇಲ್ಲಿ ಪುನರಾವರ್ತಿಸುತ್ತಿದ್ದೇನೆ ಅಷ್ಟೇ.

ಮೇಲಿನ ಪ್ರಾರ್ಥನೆಯ ಅರ್ಥವನ್ನು ಗ್ರಹಿಸುತ್ತಿದ್ದಂತೆಯೇ, ನಾಸ್ತಿಕರಲ್ಲಿ ಉದ್ಭವಿಸಬಹುದಾದ ಮೊದಲ ಪ್ರಶ್ನೆ - 'ಎಲ್ಲಿದ್ದಾನೆ ಆ ಭಗವಂತ?'. ಈ ತರ್ಕವು ಪ್ರಸ್ತುತ ವಿಷಯಕ್ಕೆ ನೇರವಾಗಿ ಸಂಬಂಧಿಸದಿದ್ದರೂ ಸಹ, ಪ್ರಸಕ್ತ ಚೌಕಟ್ಟಿನಲ್ಲಿ 'ಭಗವಂತ' ಅಥವಾ 'ದೇವರು' ಎಂದರೆ 'ಮನುಷ್ಯರಾದ ನಮಗೆಲ್ಲರಿಗಿಂತ ಹಿರಿದಾದ ಒಂದು ಶಕ್ತಿ'; ಆ ಶಕ್ತಿಯನ್ನು 'ದೇವರು' ಎನ್ನದಿದ್ದರೂ, 'ಪ್ರಕೃತಿ' ಎಂದುಕೊಂಡರೂ ಅಡ್ಡಿಯಿಲ್ಲ. ಪ್ರಾರ್ಥನೆಯನ್ನು ಈಗ ಅರ್ಥೈಸಿ - 'ನಮಗಿಂತ ಪ್ರಬಲವಾದ ಶಕ್ತಿಯೊಡನೆಯ ನಮ್ಮ ನೇರ ಸಂವಾದ' ಎಂದುಕೊಳ್ಳೋಣ.

ಬಹಳಷ್ಟು ಮಂದಿ 'ಪ್ರಾರ್ಥನೆ' ಎಂದಕೂಡಲೇ, 'ಬೇಡುವುದು' ಎಂದುಕೊಳ್ಳುವುದುಂಟು; ಅದು ಸಮಂಜಸವಲ್ಲ. ಬೇಡುವುದೂ ಒಂದು ರೀತಿಯ ಪ್ರಾರ್ಥನೆ, ಹೌದು; ಆದರೆ, ಬೇಡುವುದೇ ಪ್ರಾರ್ಥನೆಯಲ್ಲ. ಪ್ರಾರ್ಥನೆಯು ಮೂಲಭೂತವಾಗಿ ಬರಿಯ 'ಸಂವಾದ' ಅಷ್ಟೇ. ಈ ಸಂವಾದವು ವ್ಯಕ್ತಿಯಿಂದ ವ್ಯಕ್ತಿಗೆ, ಅವರವರ ಭಾವ-ತರ್ಕ-ಇಚ್ಛೆ ಇವುಗಳಿಗನುಗುಣವಾಗಿ ಭಿನ್ನವಾಗಿರುತ್ತದೆ ಎನ್ನುವುದು ಸತ್ಯ. ಮನುಷ್ಯರಾಗಿ ಹುಟ್ಟಿದ ಮೇಲೆ, ಜೀವನದಲ್ಲಿ ಒಂದಲ್ಲ ಒಂದು ದಿನ, ಒಂದಲ್ಲ ಒಂದು ರೀತಿ, ಅರಿವಿದ್ದೋ, ಅರಿವಿಲ್ಲದೆಯೋ, ನಾವೆಲ್ಲರೂ 'ಪ್ರಾರ್ಥನೆ' ಮಾಡಿಯೇ ತಿರುತ್ತೇವೆ. ಆದರೆ, ನಮ್ಮ ಪ್ರಾರ್ಥನೆಯ ಸಾರ-ಉದ್ದೇಶ ವಿಭಿನ್ನವಷ್ಟೇ.

ಪ್ರಾರ್ಥನೆಯ ಸಾರಾಂಶವನ್ನು ಒಂದೇ ಲೇಖನದಲ್ಲಿ ಬರೆದಿಡುವಷ್ಟು ಪ್ರಬುದ್ಧತೆ ನನಗಿಲ್ಲವಾದ್ದರಿಂದ, ಸರಣಿಗಳಲ್ಲಿ ಬಿತ್ತರಿಸುವ ನಿರ್ಧಾರ ಸಮಂಜಸವೆನಿಸುತ್ತದೆ. ನಮ್ಮ ಬದುಕಿನ ಬಹು ಮುಖ್ಯ ಅಂಶಗಳಲ್ಲಿ ಪ್ರಾರ್ಥನೆಯೂ ಒಂದು ಎನ್ನುವುದು ನನ್ನ ಭಾವನೆ, ಆದ್ದರಿಂದ ಈ ಲೇಖನ ಸರಣಿಯು ಆತ್ಮಾವಲೋಕನದ ಒಂದು ಪ್ರಾಮಾಣಿಕ ಪ್ರಯತ್ನ ಎಂದರೂ ತಪ್ಪಾಗಲಾರದು.

ಭಾಗ-2 ರ ಸಂಚಿಕೆಯಲ್ಲಿ ಮುಂದುವರೆದಿದೆ..

Friday, December 17, 2010

Kick on their..

Image © Prajavani
Villagers boycott upcoming Panchayat Election for being deprived of basic facilities.

They demand not a stay in 'Resort'; true! All they need are the very basic facilities like road for transportation and drinking water to be made available in their village Haralahalli, Maddur Taluk.

Till date I was very happy for not shirking form my responsibility of being a sensible citizen in the biggest democracy; never have missed casting my vote in any elections since I turned magical 'eighteen'. But now, I feel really ashamed of being responsible for having put the possible best corrupts to rule us.

"None of them are good enough", I use to think looking at the contestants list at election. Just because they have invented the electronic voting machine, it doesn't mean to go push any one of the many buttons available. Hopefully, I never may leave my finger impression on the voting machine anymore.

"Boycotting elections will not help to bring the able to rule", told one of my elders when we were discussing about the issue. But, for that, I also don't want to help and bring the corrupts to rule! Personally, I feel, boycotting Panchayat Elections by villagers will definitely gonna be a  nice "kick on their a$$" for being bothered least by what they were actually elected for. Hopefully many of the sensible citizens will join their LEGS to make the KICK much more stronger.

Cheers to DeMoCrAcY!!

Friday, December 10, 2010

ನವಜೀವನ

we ~ just after Muhurtham on 28-11-2010
ಸಡಗರ, ಸಂಭ್ರಮ, ನಿಯಮ, ಆನಂದ, ಆತುರ, ಕುತೂಹಲ, ಜವಾಬ್ದಾರಿ, ಆತಂಕ, ಸಮಾಧಾನ - ಅದೊಂದು ವಿಶಿಷ್ಟ ಅನುಭವ. ನನಗೆ ಜೀವನದಲ್ಲಿ, ಒಂದು ಕೇಂದ್ರಬಿಂದು ಸ್ಥಾನವನ್ನು ಅಲಂಕರಿಸುವ ಅವಕಾಶ ಸಿಕ್ಕಿದ್ದು ಬಹುಶಃ ಇದೇ ಮೊದಲ ಬಾರಿ. ಇದುವರೆವಿಗೂ ಜನರಿಂದ ಗುರುತಿಸಲ್ಪಡುವಂಥಹ ಅದ್ಭುತ ಸಾಧನೆಯನ್ನೇನೂ ನಾನು ಜೀವನದಲ್ಲಿ ಮಾಡಿಲ್ಲವಾದ್ದರಿಂದ, ನಾಲ್ಕಾರು ಜನರ ಮಧ್ಯೆ ಇದ್ದು, ಅವರೆಲ್ಲರ ಪ್ರೀತಿ, ಕಾಳಜಿ ಹಾಗೂ ಆಶೀರ್ವಾದವನ್ನು ಪಡೆಯುವುದರಲ್ಲಿರುವ ಆನಂದದ ಪರಿವೆಯೇ ಇರಲಿಲ್ಲ ನನಗೆ. ಆ ಸುಸಂದರ್ಭ ಒದಗಿಬಂದದ್ದು ನಮ್ಮ ಮದುವೆಯ ಸಮಾರಂಭದಲ್ಲಿ.

ಒಗ್ಗಟ್ಟು; ಬೆಂಬಲ; ಸಂಬಂಧ; ಆತ್ಮೀಯತೆ; ಸಂಪ್ರದಾಯ - ಇವುಗಳ ಅರ್ಥಗಳೇ ತಿಳಿಯದಿದ್ದ ನನಗೆ, ಮದುವೆಯು ಒಂದು ಉತ್ತಮ ಪಾಠವನ್ನೇ ಕಲಿಸಿದೆ. ತಂದೆ-ತಾಯಿ, ಅಕ್ಕ-ಭಾವ, ಅಣ್ಣ-ಅತ್ತಿಗೆ, ಅತ್ತೆ-ಮಾವ, ತಮ್ಮ-ತಂಗಿ, ಬಂಧು-ಸ್ನೇಹಿತರಿಂದ ಕೂಡಿ ಪ್ರತಿಯೊಬ್ಬರೂ ಈ ಸಮಾರಂಭದಲ್ಲಿ ತಾವೇ ವಹಿಸಿಕೊಂಡ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ ರೀತಿಯನ್ನು ನಾವು ಈ ಜೀವಮಾನದಲ್ಲಿ ಮರೆಯುವಂತಿಲ್ಲ. ಇವೆಲ್ಲವುಗಳಿಗೂ ಆ ದೈವಪ್ರೇರಣೆ ಇಲ್ಲದಿಲ್ಲ. ಅವರೆಲ್ಲರ ಮುಖದಲ್ಲಿನ ಆ ಆನಂದ-ಸಂಭ್ರಮವನ್ನು ಅನುಭವಿಸಿಯೇ ತಿಳಿಯಬೇಕು; ಅದನ್ನು ಮನದಣಿಯೆ ಅನುಭವಿಸಿದ ನಾವೇ ಧನ್ಯರು.

ದಿಕ್ಕೆಟ್ಟು ಅಲೆಯುತ್ತಿದ್ದ ಜಿವಕ್ಕೊಂದು ದಾರಿ ದೊರೆತಿದೆ, ಮಸುಕಾಗಿದ್ದ ಕಂಗಳಿಗೊಂದು ಸ್ಪಷ್ಟ ಗುರಿ ಮೂಡಿದೆ, ಮೈಮರೆತಿದ್ದ ಮನಸ್ಸು ಎಚ್ಚೆತ್ತುಕೊಂಡಿದೆ. ಸಮಾಜದಲ್ಲಿ ನಮ್ಮದೇ ಆದ ಅಸ್ತಿತ್ವವನ್ನು ಕಂಡುಕೊಳ್ಳುವ ಆಶಯ ಬಲವಾಗಿದೆ. ಸಾವಿರ ಮಾತುಗಳಲ್ಲಿ ಹೇಳಬಹುದಾದದ್ದನ್ನು ಬದುಕಿ ತೋರಿಸುವ ಹಂಬಲವಿದೆ. ಪ್ರಮುಖ ತಿರುವೊಂದನ್ನು ಪಡೆದುಕೊಂಡ ಜೀವನದ ಹೊಸದೊಂದು ದಾರಿಯಲಿ ಸಾಗಿರುವ ನಮ್ಮ ಬಾಳ ಪಯಣಕೆ ನಿಮ್ಮೆಲ್ಲರ ಪ್ರೀತಿಪೂರ್ವಕ ಆಶೀರ್ವಾದದ ಅಗತ್ಯವಿದೆ!