Sunday, May 22, 2011

ಮಹಿಳೆಯರೇ.. ಹುಷಾರ್!!

ನಾನು ಅಪ್ರೂಪಕ್ಕೆ ಭಾನ್ವಾರ ಬೆಳಿಗ್ಗೆ ಬೇಗ್ನೆ ಎದ್ದು ನಿದ್ದೆಗಣ್ಣಲ್ಲೇ ಹಲ್ಲುಜ್ತಾ ತೂಕಡ್ಸ್ಕೊಂಡ್ ನಿಂತಿದ್ದಾಗ, ಅದ್ಯಾರೋ ನಮ್ ಮನೆ ಹತ್ರ ಕೂಗ್ಕೊಳ್ತಾ ಇದ್ದ್ರು.. ಥಟ್ ಅಂತ ನಿದ್ದೆ ಮಾಯ ಆಯ್ತು! ಹಲ್ಗೂ-ಬ್ರಶ್ಗೂ ಯುದ್ಧ ನಿಲ್ಸಿ, ಕಿವಿ ಕೊಟ್ ಕೇಳ್ಸ್ಕೋ೦ಡೆ.. ಹೆಣ್ಧ್ವನಿ.. ಒಂದೇ ಸೆಕೆಂಡ್ನಲ್ಲಿ ಸುಮಾರ್ ಧ್ವನಿ-ಸದ್ಗಳು ಸೇರ್ಕೊಂಡು ಏನ್ ನಡೀತಿದೆ ಅಂತ ಅರ್ಥಆಗ್ದಷ್ಟು ಗೊಂದ್ಲ ಆಗ್ಹೋಯ್ತು.. 'ಬೆಳಿಗ್ಗೆ ಬೆಳಿಗ್ಗೆನೇ ಇದೇನಪ್ಪಾ ಗಲಾಟೆ?' ಅನ್ಕೊಂಡು ಮತ್ತೆ ಬ್ರಶ್ ಮಾಡೋಕೆ ಶುರು ಮಾಡ್ದೆ.

ನಾನು-Snowy ವಾಕಿಂಗ್ ಹೊರ್ಟು ಮನೆಯಿಂದ 50 ಮೀಟರ್ ಹೋಗಿದ್ವಿ ಅಷ್ಟೇ, ಅಲ್ಲಿ ಒಂದ್ 10-15 ಜನ ಸೇರಿದ್ರು, ಕಾರು-ಬೈಕು ಎಲ್ಲಾ ನಿಲ್ಸ್ಕೊಂಡು ಅದೇನೋ ಮಾತಾಡ್ಕೋತಾ ಇದ್ದ್ರು. ನಾವೂ ಹತ್ರ ಹೋಗಿ ನಿಂತ್ವಿ. Snowy, ಮನೆಗೆ ಯಾರದ್ರೂ ಬಂದ್ರೆ ಸ್ವಲ್ಪ ಗಲಾಟೆ ಮಾಡ್ತಾನೆ; ಆದ್ರೆ ಅವ್ನಿಗೆ ಈ Road-Sense ತುಂಬಾ ಇದೆ, ಅಷ್ಟೆಲ್ಲ ಜನ ಇದ್ದ್ರೂ ಸುಮ್ನೆ ನಿಂತಿದ್ದ ನಂಜೊತೆಗೆ. ನಾವೂ ಯಾರ್ಗೂ ಕಡ್ಮೆ ಏನಿಲ್ಲ ಅನ್ನೋಥರಾ, ನಮ್ ಏರಿಯಾ ಬೀದಿ-ನಾಯ್ಗಳೂ ಅಲ್ಲೇ ಸೇರ್ಕೊಂಡು ಅವ್ಗಳ್ ಭಾಷೇಲಿ ಏನೇನೋ ಹೇಳ್ಕೋತಾ ಇದ್ದ್ವು.

"ಒಬ್ಬ ಅಟೋ ಓಡ್ಸ್ತಿದ್ದ, ಇನ್ನೊಬ್ಬ ಹಿಂದೆ ಕೂತ್ಕೊಂಡಿದ್ದ.." ಒಬ್ರು ಹೇಳ್ತಿದ್ದ್ರು.
"ನಾನು ಮೇಲಿಂದ ನೋಡ್ತಿದ್ದೆ, ಕೆಳ್ಗಡೆ ಇಳ್ದು ಬರೋದ್ರಲ್ಲಿ ಹೋಗ್ಬಿಟ್ಟ್ರು.." ಇನ್ನೊಬ್ರು ಹೇಳಿದ್ದ್ರು.
"Turning ನಲ್ಲಿ ಆಟೋ pass ಆಯ್ತು, ಇಲ್ಲಿಗೆ ಬಂದ್ಮೇಲೆ ಸರ ಕಿತ್ಕೊಂಡಿದ್ದಾರೆ ಅಂತ ಗೊತ್ತಾಯ್ತು" - ಮೇರು ಟ್ಯಾಕ್ಸಿ ಡ್ರೈವರ್ ಹೀಗೆ ಹೇಳ್ದಾಗ್ಲೇ ನನ್ಗೆ ಗೊತ್ತಾಗಿದ್ದು ಯಾರೋ ಇಬ್ಬ್ರು ಆಟೋಲಿ ಬಂದು ಸರ ಕಿತ್ಕೊಂಡು ಹೋಗಿದಾರೆ ಅಂತ.


ಅಣ್ಣಾವ್ರ 'ಸಂಪತ್ತಿಗೆ ಸವಾಲ್' ಪಿಕ್ಚರ್ ನ ಕೊನೇ ರೀಲ್ ನಲ್ಲಿ ಬರೋ ಪೋಲಿಸ್ ಥರಾ 'ಹೊಯ್ಸಳ-84' ಜಿಪ್ ಬಂತು. ಅಷ್ಟ್ರಲ್ಲಿ ಆಗ್ಲೇ ಸರ ಕಳ್ಕೊಂಡೋರು ಪೋಲಿಸ್ ಸ್ಟೇಷನ್ ಗೆ ಹೋಗಿ ಆಗಿತ್ತು. ಹೊಯ್ಸಳ ಪೋಲಿಸ್ ಗೆ ಜನ್ರೆಲ್ಲಾ ಅಲ್ಲಿ ಏನು-ಹೇಗೆ-ಯಾವಾಗ ನಡೀತು ಅಂತ ಹೇಳೋಕೆ ಶುರು ಮಾಡಿದ್ರು. ಮೊದ್ಲೇ ಅದೆಲ್ಲಾ ಕೇಳಿದ್ದ Snowy ಒಂದೆರ್ಡು ಹೆಜ್ಜೆ ಮುಂದೆ ಹೋದ, ನಾನೂ ಅವ್ನ ಹಿಂದೆ ಅಲ್ಲಿಂದ ಹೊರ್ಟೆ.

'ಪುಷ್ಪಾಂಜಲಿ ಉದ್ಯಾನವನ' - ಗಿರಿನಗರ ಪೋಲಿಸ್ ಸ್ಟೇಷನ್ ಹತ್ರ ಇರೋ ಬಿ.ಬಿ.ಎಂ.ಪಿ. ಪಾರ್ಕ್. ಬೆಳಿಗ್ಗೆ ಇಂದ ಶುರು ಆಗಿ ಸಂಜೆ-ರಾತ್ರಿ ತನಕ ಜನ್ರು ಬೇರೆ-ಬೇರೆ(?) ಕಾರ್ಣಕ್ಕೆ ಆ ಪಾರ್ಕ್ ಗೆ ಬರ್ತಾರೆ. ಅಂಥವ್ರಲ್ಲಿ ವೇಟ್-ಷುಗರ್ ಕಂಟ್ರೋಲ್ ಗೆ ವಾಕ್-ಜಾಗ್ ಮಾಡೋರೆ ಜಾಸ್ತಿ; ಅರ್ಥದಷ್ಟು ಹೆಂಗಸ್ರೆ ಇರ್ತಾರೆ. ಪೋಲಿಸ್ ಸ್ಟೇಷನ್ ನಿಂದ ಹೆಚ್ಚು ಅಂದ್ರೆ 200 ಮೀಟರ್ ದೂರ ಇರೋ ಈ ಪಾರ್ಕ್ ಸುತ್ತ-ಮುತ್ತ ಹೋದ್ವರ್ಷ ಸರಗಳ್ರು ಜಾಸ್ತಿ ಆಗಿದ್ರಿಂದ, ಗಿರಿನಗರ ಪೋಲಿಸ್ ಬೆಳಿಗ್ಗೆ-ಸಂಜೆ ಹೊತ್ನಲ್ಲಿ ಪಾರ್ಕ್ ಹತ್ರ ಕಾವಲು ಇರ್ತಿದ್ದ್ರು, ಈಗ್ಲೂ ಇರ್ತಾರೆ. ಇದ್ರಿಂದ ಕಳ್ರೂ ಕಡ್ಮೆ ಆಗಿದಾರೆ ಅನ್ನಿ. ಆದ್ರೆ, ಇವತ್ತು ಕಳ್ರು ಪಾರ್ಕ್ ಬಿಟ್ಟು ಸ್ವಲ್ಪ ದೂರ ಬಂದು ಕೆಲ್ಸ ಮಾಡಿದಾರೆ. ಇದ್ರಲ್ಲಿ ಪೋಲಿಸ್ ತಪ್ಪೇನಿಲ್ಲ ಬಿಡಿ, ಪಾಪ.

ಚಿನ್ನದ ಬೆಲೆ ಎರ್ಡು ಸಾವ್ರಕ್ಕಿಂತ ಜಾಸ್ತಿ ಆಗಿರೋವಾಗ, ಸರ ಕಳ್ಕೊಳ್ಳೋದು ತಮಾಷೆ ಮಾತಲ್ಲ. ಅದೆಷ್ಟು ಕಷ್ಟಪಟ್ಟು ದುಡ್ಡು ಜೋಡ್ಸಿ ಈ ಅಕ್ಷಯ ತೃತೀಯಕ್ಕೆ ಸರ ತಂದ್ಕೊಂಡಿದ್ರೋ ಗೊತ್ತಿಲ್ಲ, ಇವತ್ತು ಯಾರ್ದೋ ಪಾಲಾಯ್ತು. ಈ ಕಳ್ರೂ ಅಷ್ಟೇ.. ಅದ್ಯಾಕೆ ಹೀಗೆ ಮಾಡ್ತಾರೋ ಗೊತ್ತಾಗಲ್ಲ. ಅವ್ರು ತುಂಬಾ ದಿನ ಆರಾಮಾಗಿ ಇರೋಕಾಗಲ್ಲ; ಅಬ್ಬಬ್ಬಾ ಅಂದ್ರೆ ಒಂದ್ ಸರಕ್ಕೆ ಲಕ್ಷ ಬೆಲೆ ಇರ್ಬಹುದು. ಲಕ್ಷ ಹಣ ಅದೆಷ್ಟು ದಿನ ಬರುತ್ತೆ? ಒಂದಲ್ಲ ಒಂದಿವ್ಸ ಕಳ್ರು ಕಂಬಿ ಏಣ್ಸೋದಂತೂ ತಪ್ಪಲ್ಲ, ಅದಿಕ್ಯಾಕೆ ಈ ಕೆಲ್ಸ ಮಾಡ್ಬೇಕು? ಅನ್ನೋ ಯೋಚ್ನೇನೇ ಅವ್ರಿಗೆ ಬರ್ದಿರೋದು ಆಶ್ಚರ್ಯ!

ಅದೇನೇ ಇರ್ಲಿ, ಆದಷ್ಟೂ ನಾವು ನಮ್ ಎಚ್ಚರ್ಕೆಲಿರೋದು ಒಳ್ಳೇದು. ಅದಕ್ಕೆ, ವಾಕಿಂಗ್/ಜಾಗಿಂಗ್ ಮಾಡೋ ಹೆಂಗಸ್ರು ಮತ್ತು ಹೆಣ್ಮಕ್ಳು ಈ ಕೆಳ್ಗಿರೋ ಅಂಶಗಳ್ನ ಗಮ್ನಿಸ್ಕೊಬೇಕು:
  • ಹೆಂಗಸ್ರು ಒಬ್ಬೊಬ್ರೇ ವಾಕಿಂಗ್ ಹೋಗೋ ಬದ್ಲು, ಏರ್ಡು-ಮೂರ್ ಜನ ಗುಂಪಲ್ಲಿ ಹೋಗೋದು.
  • ಆದಷ್ಟೂ ಬೆಲೆ ಬಾಳೋ ವಸ್ತುಗಳ್ನ ಅಗತ್ಯವಿಲ್ದಾಗ ಮನೇಲೆ ತೆಗ್ದಿಡೋದು.
  • ಜನ ಹೆಚ್ಚಾಗಿರೋ ಜಾಗ್ದಲ್ಲಿ ವಾಕಿಂಗ್ ಮಾಡೋದು.
  • ತೀರ ಬೆಳಿಗ್ಗೆ ಅಥ್ವಾ ತಿರಾ ಸಂಜೆ ಕತ್ಲಾಗೋವರ್ಗೂ ವಾಕಿಂಗ್ ಮಾಡ್ದೆ ಇರೋದು.
  • ಕತ್ನಲ್ಲಿರೋ ಸರ ಮುಚ್ಚೋ ಹಾಗೆ ಸೆರಗು/ದುಪಟ್ಟಾ ಹಾಕೊಳೋದು.
  • ಪ್ರತಿ ದಿನ ಬೇರೆ-ಬೇರೆ ದಾರಿ/ಟೈಮಲ್ಲಿ ವಾಕಿಂಗ್ ಮಾಡೋದು.
  • ವಾಕಿಂಗ್ ಮಾಡ್ವಾಗ ಪಕ್ದಲ್ಲಿ ಬರೋ ಜನ-ಗಾಡಿ ಬಗ್ಗೆ ಎಚ್ಚರ್ಕೆಯಿಂದಿರೋದು.
  • ಸಾಧ್ಯವಾದ್ರೆ ಮೊಬೈಲ್ ಫೋನ್ ಜೊತೇಲಿ ಇಟ್ಕೊಳ್ಳೋದು.

ಬನ್ನಿ, ನಾವೆಲ್ಲಾ ಸೇರಿ ಬೆಂಗ್ಳೂರ್ನಲ್ಲಿ ಸುರಕ್ಷಿತವಾಗಿ ಜೀವ್ನ ನಡಸೋ ಪ್ರಾಮಾಣಿಕ ಪ್ರಯತ್ನ ಮಾಡೋಣ. ಆದ್ರೆ, ಅದು ಸಾಧ್ಯನಾ? ಅನ್ನೋದು ಬೇರೆ ಪ್ರಶ್ನೆ!!

Sunday, May 15, 2011

a step away..!

Two days of the year, specially dedicated to Women, have just passed by - March 8th (Women's Day) and May 8th (Mother's Day). Both the days being observed on the 8th date is a unique thing that happened this year, 2011. The latter went without any significant thing happening, but the former was too much a special day for me. All credit goes to Women around, for making March 8th - my day!

08-03-2011, Women's Day, was yet another day for me at work. As usual, I had reached office a bit late than my reporting time at 7 in the morning. After a couple of hours attending to my chores, I walked in to the Accounts Department to get my salary slip printed. There are two ladies in Accounts, Shashikala in her mid 40s and Eliana in her mid 50s, who were busy with files and papers then. Normally, I try to distract them by talking to our attendant Murugesh as they may feel disturbed if spoken directly.

Me: Murugesh, you know today is a very special day? Especially in Accounts Dept...
Murugesh: Is it sir? What is special today?
It's Women's Day..
So, how will that be special for us? We are not women!
It is special, coz the women here will be getting sweets to all of us while they celebrate Women's Day
Both the ladies spoke at once: Sure sir, what sweets you like to have?
They were smiling happily, which made me feel proud for getting the timing just right.
Am fine with any sweet, how about you Murugesh?
Me too sir..
Ok, we will get it for you all
I had printed my pay slip logging in to HRMS by then and moved back to my place.

In an hour's time, I was called for to the Accounts; Shashikala Mam had sweets in her hand by the time I could reach there. It was a pleasant surprise to me! Bengali sweets were all looking so delicious (didn't get the name though), gave her one, me took two and handed over the rest to Murugesh to distribute to others. I thanked her and got back to work.

The day went hectic, it was half past 4 in the evening when I was walking along Accounts and suddenly Eliana Mam appeared and said: I was looking for you since afternoon sir..
Me: Whats the matter Mam?
Been to the shop myself during lunch and got some sweets for you
Wow! Where are they?
While we reached her desk, Murugesh joined us.
Murugesh: Sir, since afternoon Mam refused my request for having a sweet to eat
Yes Murugesh, I wanted to give first to Prashanth sir as he asked for it
I already had picked one jalebi from the lot and starting eating.
Sir, the sweet is actually for three reasons
Gulp..!! Three reasons..??
Yeah, 1. Today is Women's Day
Then..
2. Even though it isn't your job, you have been processing all our salaries every month in time for the past 3 years in HRMS. We should be giving you sweets every month!
aaaah! Never mind.. I too want salary right?
3. Yours is the best behavior with women I have ever seen in this office. You always talk to women with respect and never use words that might hurt us.
I never had a clue what to speak in response.
Can I have one more jalebi Mam?
Sure sir, you can have the entire thing
Thanks, so that I will not be asking for sweets next time due to 'sugar complaint'..??
Everybody: LoL..

On my way back home, was feeling very happy and good within. I knew it wasn't easy to get such a compliment from ladies, especially when it comes to behavior of Men. It definitely has piled up loads of responsibility on my shoulders for rest of the life. I text-ed my wife and shared with few friends of mine about this. All replied in appreciation and my wife said 'good dear.. keep it up'.

That day, I literally was flying and for me, heaven was just a step away..

Sunday, May 8, 2011

ಓಂ ಸಾಯಿ ರಾಮ್..

ಸತ್ಯ ಸಾಯಿ ಬಾಬ (ಕೃಪೆ - ಇಂಡಿಯಾ ಟಿವಿ)
ಶ್ರೀ ಸತ್ಯ ಸಾಯಿ ಬಾಬ ರವರ ಮೇಲಿನ ಚಿತ್ರವನ್ನು ನೋಡುತ್ತಿದ್ದಂತೆಯೇ ನನಗೆ ಎಲ್ಲಿಲ್ಲದ ಅಚ್ಚರಿಯಾಯಿತು. ಈ ಚಿತ್ರವು, ನಾನು ಕಂಡ ಸಾಯಿ ಬಾಬ ಅವರ ವಿಶೇಷ-ವಿಭಿನ್ನ ಛಾಯಾಚಿತ್ರ. ಸಾಮಾನ್ಯವಾಗಿ, ಸಾಯಿ ಬಾಬ ರವರ ಎಲ್ಲಾ ಚಿತ್ರಗಳು ಅವರು ಅಭಯ ಹಸ್ತವನ್ನು ತಮ್ಮ ಭಕ್ತರೆಡೆಗೆ ಆಶಿರ್ವದಿಸುವ ರೀತಿಯಲ್ಲಿ ಇರಿಸಿಕೊಂಡ ಭಂಗಿಯಲ್ಲೇ ಇರುವುದನ್ನು ನಾವು ಗಮನಿಸಿದ್ದೇವೆ. ಆದರೆ, ಇಲ್ಲಿ, ಸಾಯಿ ಬಾಬ ಅವರು ತಮ್ಮ ನೈಜ ದೈವೀಯತೆಯನ್ನು ತೊರೆದು, ದೀನ ಭಾವರಾಗಿರುವಂತೆ ತೋರುತ್ತದೆ. ಅಚ್ಚರಿಯಿಂದ ಮೊದಲುಗೊಂಡು ಕುತೂಹಲ ಮೂಡಿಸಿದ ಈ ಚಿತ್ರದ ಬೆನ್ನುಹತ್ತಿ ಹೊರಟ ನನಗೆ ದೊರೆತ ಮಾಹಿತಿ : 25 ನೇ ಮಾರ್ಚ್, 2011 ರಂದು ಸತ್ಯ ಸಾಯಿ ಬಾಬ ತಮ್ಮ ಭಕ್ತರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಅಲ್ಲಿದ್ದ ಭಕ್ತರಲ್ಲೊಬ್ಬರು ಸೆರೆಹಿಡಿದ ಚಿತ್ರವಿದು. ಅದು ಬಾಬಾರೊಡನೆ ತಮ್ಮ ಕಟ್ಟಕಡೆಯ ಸಂದರ್ಶನವೆಂದು, ತಮ್ಮ ಕಣ್ಮುಂದೆ ಕಾಣುತ್ತಿದ್ದ ದೈವವು ಮತ್ತೆಂದೂ ತಮ್ಮ ಮುಂದೆ ಬರಲಾರದಷ್ಟು ದೂರ ಹೊರಟುಹೋಗುತ್ತದೆಂಬ ಅರಿವು ಅಲ್ಲಿ ನೆರೆದಿದ್ದ ಯಾರೊಬ್ಬ ಭಕ್ತನ ಮನಸ್ಸಿನಲ್ಲೂ ಅರಿಕೆಯಾಗಿರಲಿಕ್ಕಿಲ್ಲ. ಆದರೆ, ಅದು ತಮಗೆ ದೊರೆತ ಕೊನೆಯ ಅವಕಾಶವೆಂದು ಅರಿತಿದ್ದ ಬಾಬ, ತಮ್ಮ ಎರಡೂ ಕರಗಳನ್ನು ಜೋಡಿಸಿ ಭಕ್ತರಿಗೆ ಕೈಮುಗಿದಾಗ, ಅವರ ಮನದಾಳದಲ್ಲಿದ್ದ ಕೃತಜ್ಞತಾಭಾವವು ಅವರ ಮುಖದಲ್ಲಿ ಮಡುಗಟ್ಟಿತ್ತು.

ಮೂಲತಃ ನಾನು ಬಾಬ ಅವರ ಪರಮ ಭಕ್ತನೇನಲ್ಲ. ಬಾಲ್ಯದಲ್ಲಿ ನಾನು ಬಾಬಾರನ್ನು ಕಂಡದ್ದು ಒಬ್ಬ ಮಹಾನ್ ಮಾಂತ್ರಿಕನಂತೆ! ತಮಗೆ ಶರಣೆಂದು ಬಂದ ಭಕ್ತಕೊಟಿಗೆ ಕ್ಷಣಾರ್ಧದಲ್ಲಿ ವಿಭೂತಿಯನ್ನೋ ಅಥವಾ ಆಭರಣವನ್ನೋ ಶೂನ್ಯದಿಂದ ಸೃಷ್ಟಿಮಾಡಿ ಆಶಿರ್ವಾದವಾಗಿ ದಯಪಾಲಿಸುತ್ತಿದ್ದ ದೃಶ್ಯವು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಾನು ಪ್ರಭುದ್ಧನಾದಂತೆಲ್ಲಾ ಬಾಬ ನನ್ನ ಸ್ಮೃತಿಯಿಂದ ಸಂಪೂರ್ಣವಾಗಿ ಮರೆಯಾಗಿಹೋಗಿದ್ದರು. ಅವರು ಕಟ್ಟಿ-ಬೆಳೆಸಿ-ಪೋಷಿಸುತ್ತಿದ್ದ ದಯಾಸಂಸ್ಥೆಗಳ ಒಂದು ಪ್ರಮುಖ ಅಂಗವಾಗಿ, ಮಾಹಿತಿ ತಂತ್ರಜ್ಞಾನದ ಸ್ಪರ್ಧೆಗಿಳಿದು ಬೆಂಗಳೂರಿನ ವೈಟ್-ಫೀಲ್ಡ್ ನಲ್ಲಿ ಕಂಗೆಟ್ಟು ತಲೆಯೆತ್ತಿರುವ ಸಹಸ್ರಾರು ಹವಾನಿಯಂತ್ರಿತ ಕಟ್ಟಡಗಳ ಮಧ್ಯೆ ಸದ್ದಿಲ್ಲದೆ, ಉಚಿತ ಉನ್ನತ ವೈದ್ಯಕೀಯ ಸೇವೆಯನ್ನು ನಿರಂತರವಾಗಿ ಒದಗಿಸುತ್ತಿರುವ 'ಶ್ರೀ ಸತ್ಯ ಸಾಯಿ ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್' ಅನ್ನು ಹಲವಾರು ಬಾರಿ ನಾನು ತಿರುಗಿನೋಡದೇ ತಿರಸ್ಕರಿಸಿದಂತೆ ತಿರುಗಾಡಿದ್ದುಂಟು. ಆದರೆ ಇಂದು, ಅದೊಂದು ಪವಿತ್ರ ಸ್ಥಾನವೆಂಬ ಪ್ರಬಲ ನಂಬಿಕೆ-ಭಾವನೆಯು ನನ್ನಲ್ಲಿ ಮನೆಮಾಡಿದೆ.

ಬಾಬಾರವರು ತಾವು ತಮ್ಮ 96 ನೇ ವಯಸ್ಸಿನವರೆಗೂ ಆರೋಗ್ಯದಿಂದ ಜೀವಿಸುವುದಾಗಿ ಘೋಷಿಸಿದ್ದರು; ಆದರೆ, ವಿಧಿಯ ಹಲವಾರು ಅನಿರೀಕ್ಷಿತ ಅಪಘಾತಗಳ ಕಾರಣದಿಂದಾಗಿ ಬಾಬ 84 ರ ಹರೆಯದಲ್ಲೇ ದೈವನ ಅಧೀನರಾದರು. "ಅವರ ಭಕ್ತರು ಹೇಳುವಂತೆ, ಬಾಬ ಸತ್ತವರನ್ನು ಬದುಕಿಸುವ ಶಕ್ತಿ ಹೊಂದಿದ್ದರೆ, ತಮ್ಮನ್ನು ತಾವು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲವೇಕೆ?" ಎಂಬುದು ಕೆಲವರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ-ಸಾಧ್ಯ. ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಪ್ರಸಂಗವೊಂದು ಇಲ್ಲಿ ಪ್ರಸ್ತುತವೆನಿಸಬಹುದು ಎಂಬುದು ನನ್ನ ಭಾವನೆ.
ಲಂಕೆಯನ್ನು ತಲುಪಲು ಶ್ರೀರಾಮನ ಕಪಿಸೈನ್ಯ ಬಂಡೆಕಲ್ಲುಗಳಿಂದ ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸುತ್ತಿದ್ದವು. ಪ್ರತಿಯೊಂದು ಬಂಡೆಯ ಮೇಲೆ 'ಶ್ರೀರಾಮ' ಎಂದು ಬರೆದು ಭಕ್ತಿಯಿಂದ ಸಮುದ್ರದ ನೀರಿನ ಮೇಲೆ ಹಾಕಲು, ಅವು ಮುಳುಗದೇ ತೇಲುತ್ತಿದ್ದವು. ಇದನ್ನು ಕಂಡ ಶ್ರೀರಾಮನಿಗೆ ಆಶ್ಚರ್ಯವಾಯಿತು. ಆದಿನ ರಾತ್ರಿ ಏಕಾಂತದಲ್ಲಿ ಶ್ರೀರಾಮ ತಾನೂ ಸಹ ಒಂದು ಕಲ್ಲನ್ನು ತೆಗೆದುಕೊಂಡು ಸಮುದ್ರದ ನೀರಿಗೆ ಹಾಕಲು, ಅದು ಮುಳುಗಿಹೋಯಿತು. ಇದನ್ನೆಲ್ಲಾ ಗಮನಿಸುತ್ತಿದ್ದ ಹನುಮಂತ, ಕಲ್ಲುಗಳು ನೀರಿನ ಮೇಲೆ ತೇಲಲು 'ರಾಮನಾಮ'ವೇ ಕಾರಣ ಎಂದು ಶ್ರೀರಾಮನನ್ನುದ್ದೇಶಿಸಿ ಹೇಳಿದನು. ಇದರಿಂದ, ರಾಮನಿಗೆ ಇರದ ಶಕ್ತಿಯು ಅವನ ಪರಮ ಭಕ್ತರು ಭಜಿಸುವ ಶ್ರೀರಾಮನಾಮದ ಮಹಿಮೆಯ ಅಖಂಡವಾದ ನಂಬಿಕೆಗೆ ಇದ್ದಿತು ಎಂಬುದನ್ನು ಇಡೀ ಜಗತ್ತಿಗೇ ತೋರಿಸಿಕೊಡಲಾಗಿದೆ.
ಮೇಲಿನ ಪ್ರಸಂಗದ ಸಾರಾಂಶವನ್ನು ಗ್ರಹಿಸಿಕೊಂಡು ಹೇಳುವುದಾದರೆ, ಅನ್ಯರಿಗೆ ಒಳಿತನ್ನು ಮಾಡುವ ಶಕ್ತಿ ಬಾಬಾರವರಿಗೆ ಇದ್ದಿತೆ ವಿನಃ ತಮ್ಮ ವೈಯಕ್ತಿಕ ಒಳಿತನ್ನು ಸಾಧಿಸಿಕೊಳ್ಳುವುದಕ್ಕಲ್ಲ. ಅವರು ಜನ್ಮ ತಳೆದದ್ದೇ ಜಗತ್ತಿನ ಕಲ್ಯಾಣಕ್ಕಾಗಿಯೇ ಹೊರೆತು ಸ್ವಾರ್ಥ ಸಾಧನೆಗಾಗಿ ಅಲ್ಲ. ಇದಕ್ಕೆಲ್ಲಾ ಮೂಕ ಸಾಕ್ಷಿಯೆಂಬಂತೆ ಪ್ರಪಂಚದಾದ್ಯಂತ ಅವರು ಹುಟ್ಟಿಹಾಕಿದ ಹತ್ತು ಹಲವು ದಯಾಸಂಸ್ಥೆಗಳು ನಮ್ಮೆದುರಿಗಿವೆ. ಆ ಸಂಸ್ಥೆಗಳಿಂದ ಪ್ರಯೋಜನ ಪಡೆದುಕೊಂಡ ಸಹಸ್ರಾರು ಮಂದಿ ನಮ್ಮ ನಡಿವೆಯೇ ಇದ್ದಾರೆ. ತಮ್ಮ ಹುಟ್ಟೂರಾದ ಪುಟ್ಟಪರ್ತಿಯಲ್ಲಿ ಅವರು ಮಾಡಿರುವ ಜನಸೇವೆಯನ್ನು ಅಲ್ಲಿನ ಘನ ಸರ್ಕಾರವು ಇಲ್ಲಿಯವರೆಗೂ ಮಾಡಲು ಸಾಧ್ಯವಾಗಿಲ್ಲ, ಇಂಥಹ ನಿಸ್ವಾರ್ಥ ಸಮಾಜ ಸೇವೆಯನ್ನು ಅಪಾರ ಪ್ರಮಾಣದಲ್ಲಿ ಒಬ್ಬೊಂಟಿಗರಾಗಿ ಸಾಧಿಸಿದ್ದೇ ಬಾಬಾರವರು ನಡೆಸಿದ ಅದ್ಭುತ ಪವಾಡ. ಅಗಲಿದ ಅಂಥಹ ಮಹಾನ್ ಚೇತನಕ್ಕೆ ಈ ಮೂಲಕ ನನ್ನ ಭಾವಪೂರ್ಣ ಶ್ರದ್ಧಾಂಜಲಿಯ ಅರ್ಪಣೆ..