Saturday, November 27, 2010

Personal Invitation


Dear Friends,

Our wedding is happening today and tomorrow, that is 27th & 28th November, 2010 at SwayamPrabha Kalyana Mantapa, Cauvery Nagar, Bangalore - 560079.

You all have been extending your support unconditionally ever since I started to Blog and now, we would like to have the pleasure of your presence on this special occasion of our Marriage.

Our sincere request to consider this as a personal invitation, make it to the  wedding function and do bless both of us.

Thank you!

Prashanth & Veena.
(Wedding Website)

Saturday, November 20, 2010

ಏಕೀ ಮುನಿಸು?

When Nature Laughs, Humans Cry.. (© The Hindu)
ಮುಳುಗಿಹೋದ ಮನೆಗಳು..
ಕಾಳಿಲ್ಲದ ಕಣಜಗಳು..
ಮಸುಕಾದ ಮನಸುಗಳು..
ಕೆಲಸವಿಲ್ಲದ ಕೈಗಳು..
ನಗುವಿಲ್ಲದ ಮೊಗಗಳು..
ಆಸರೆಯಿಲ್ಲದ ಆಕಳುಗಳು..
ನಾಶವಾದ ಬೆಳೆಗಳು..
ಕೊಚ್ಚಿಹೋದ ಕನಸುಗಳು..

ಇವಿಷ್ಟೇ ಇಂದು ನಮ್ಮ ರೈತರ ಬದುಕಲ್ಲಿ ಉಳಿದಿರುವುದು-ಕಾಣಸಿಗುವುದು. ಜಗತ್ತಿಗೇ ಅನ್ನವನ್ನು ನೀಡುವ ಕೈಗಳು ಇಂದು ಆಸರೆಗಾಗಿ ಕೈಚಾಚಿ ಕುಳಿತಿರುವ ದೃಶ್ಯವು ಆಘಾತವನ್ನುಂಟುಮಾಡಿದೆ. ಅತೀವೃಷ್ಟಿಯಿಂದಾಗಿ ಎದೆಯೆತ್ತರಕ್ಕೆ ಬೆಳೆದು ನಿಂತ ಚಿನ್ನದಂಥ ಬೆಳೆಗಳು ನೆಲಕ್ಕುರುಳಿ, ಮೊಳಕೆಯೊಡೆದು ಹಾಳಾಗಿವೆ. ಈಗಾಗಲೇ ಬೆಟ್ಟದಷ್ಟಿದ್ದ ಸಾಲದ ಹೊರೆಗೆ ಮತ್ತಷ್ಟು ಹೇರಿಕೊಂಡಿದೆ. ದುಖದ ಅಳು ಮುಂದುವರೆದರೂ ಸಹ ರೈತರ ಕಣ್ಣೀರು ಬತ್ತಿಹೋಗಿದೆ.

ಇತರರ ಸುಖಕ್ಕಾಗಿ ತನ್ನ ತ್ಯಾಗದಿಂದಲೇ ಜೀವನದ ಸಾರ್ಥಕತೆಯನ್ನು ಕಂಡುಕೊಂಡು ಬದುಕುತ್ತಿರುವ ನಮ್ಮ ರೈತರನ್ನು ಘನ ಸರ್ಕಾರಗಳು ಹಿಂದಿನಿಂದಲೂ ಕಡೆಗಾಣುತ್ತಾ ಬಂದಿವೆ. ಆದರೆ, ಅದೇಕೋ ಈಗ ಪ್ರಕೃತಿಯೂ ಸಹ ರೈತನ ಮೇಲೆ ಕೆಂಗಣ್ಣು ಬೀರಿದೆ. ಮುಂಗಾರಿನಿಂದಲೂ ಸಕಾಲದಲ್ಲಿ ಮಳೆಯಾಗಿ, ಸೊಂಪಾಗಿ ಕಂಗೊಳಿಸುತ್ತಿದ್ದ ಬೆಳೆಯು ರೈತರ ಜೀವನದಲ್ಲಿ ಹೊಸ ಹುರುಪನ್ನು ತಂದುಬಿಟ್ಟಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ, ಅಕಾಲಿಕ ಮಳೆಯಿಂದಾಗಿ ಈಗ ಬೆಳೆಗಳು ನಾಶವಾಗಿ, ಫಸಲು ನೀರಿನ ಪಾಲಾಗಿಹೋಗಿದೆ.

ಹೊಲಸಿನ ರಾಜಕೀಯದಲ್ಲಿ ಮುಳುಗಿ ತೇಲುತ್ತಿರುವ ನಾಯಕರುಗಳಿಗೆ ರೈತರ ಕಣ್ಣಿರಿನ ಅರಿವೆಯೂ ಇಲ್ಲ; ಕೊಚ್ಚಿಹೋದ ರೈತರ ಬದುಕಿನ ಬಗೆಗೆ ಕಾಳಜಿಯೂ ಇಲ್ಲ. ಕೋಟಿಗಟ್ಟಲೆ ಹಣ ಲೂಟಿ ಮಾಡಿ, ಸಿಕ್ಕ ಸಿಕ್ಕ ಭೂಪ್ರದೇಶಗಳನ್ನು ಅಕ್ರಮವಾಗಿ ಕಸಿದುಕೊಂಡು ರಾಜಾರೋಷವಾಗಿ ತಿರುಗುತ್ತಿರುವ ರಾಜಕಾರಣಿಗಳ ಮಧ್ಯೆ ತಮ್ಮದೇ  ಅಂಗೈ ಅಗಲದ ಬರಡು ಭೂಮಿಯಲ್ಲಿ ಸಾಲ ತಂದು ಬೆಳೆದ ಧಾನ್ಯವನ್ನು ಕಳೆದುಕೊಂಡು ತುತ್ತು ಅನ್ನಕ್ಕಾಗಿ ರೈತರು ಪರದಾಡುತ್ತಾ ಮೂಲೆಗುಂಪಾಗಿರುವುದು ದುರಂತವೇ ಸರಿ. ಪ್ರಕೃತಿಯೂ ಸಹ ನಂಬಿಕೆದ್ರೋಹವೆಸಗಿ ರಾಜಕಾರಣಿಗಳ ಸಾಲಿನಲ್ಲಿ ನಿಂತಿರುವಾಗ ರೈತರಿಗೆ ಆಸರೆ ನೀಡುವವರು ಯಾರು? ಅವರ ಮೊರೆ ಆಲಿಸುವವರು ಯಾರು? ರೈತರಿಗೆ ಸಹಾಯ ಮಾಡುವವರಾದರೂ ಯಾರು?

ಹೇ ವರುಣದೇವ, ನಿನಗೆ ಪೌರುಷವೆನಾದರೂ ಇದ್ದರೆ; ಮುಳುಗಿಸು ಹೊಲಸು ರಾಜಕಾರಣಿಗಳನ್ನು, ಕೊಚ್ಚಿಕೊಂಡು ಹೋಗುವಂತೆ ಮಾಡು ಬ್ರಷ್ಟಾಚಾರವನ್ನು, ನೆಲಸಮಗೊಳಿಸು ರೈತರ ಸಾಲದ ಹೊರೆಯನ್ನು, ನಿರ್ಮೂಲನೆ ಮಾಡು ಸಮಾಜಘಾತುಕ ಶಕ್ತಿಗಳನ್ನು, ಬುಡಮೇಲು ಮಾಡು ಭಯಾನಕ ರೋಗಗಳ ಅಸ್ತಿತ್ವವನ್ನು. ಇವ್ಯಾವುವೂ ಸಾಧ್ಯವಾಗದಿದ್ದರೆ, ದಯಮಾಡಿ-ಕರುಣೆತೋರಿ ಕೈಕಟ್ಟಿ ಕುಳಿತುಕೋ. ಅನ್ಯತಾ ಬಡ ರೈತನ ಮೇಲೆ ನಿನಗೆ ಏಕೀ ಮುನಿಸು?

Sunday, November 14, 2010

Our Pledge

After a long time, I visited my nephew who is studying in Grade III @ Kendriya Vidyala, Chennai. He has grown up so 'mature', I never was that in his age! To bug him for a while on the occasion of Children's Day, I kept on asking him what all he was taught at School. One of the many things he told me was this:
Our Pledge
India is my Country.
All Indians are my Brothers and Sisters.
I love my Country & I am proud of its rich and varied Heritage.
I shall always strive to be worthy of it.
I shall give respect to my Parents, Teachers & all Elders and treat everyone with courtesy.
I shall be kind to Plants and Animals.
To my Country and my People, I pledge my Devotion.
In their well being and prosperity alone, lies my Happiness.
JAI HIND!
Though we were taught all these at childhood, it felt 'all new' to me as he read it out. For what we 'elders' are today, I did feel ashamed and had nothing more to ask; but lots to introspect.

Happy Children's Day to all kid(do)s!!

Thursday, November 11, 2010

ಕತ್ತಲೆಗೆ ದೂಡಿತು ಬೆಳಕಿನ ಹಬ್ಬ

ಹಬ್ಬಗಳೆಂದರೆ ನಮಗೆಲ್ಲಾ ಎಲ್ಲಿಲ್ಲದ ಸಂಭ್ರಮ; ಅದರಲ್ಲೂ ದೀಪಾವಳಿ ಬಂತೆಂದರೆ, ನಮ್ಮ ಸಡಗರ ಹೇಳತೀರದು. ಅಮ್ಮ ತಯಾರಿಸುವ ರುಚಿಕರ ಬಿಸಿ-ಬಿಸಿ ಕಜ್ಜಾಯದ ಸವಿ ಒಂದೆಡೆಯಾದರೆ, ಅಪ್ಪ ತಂದ ಪಟಾಕಿಗಳ ಅಬ್ಬರ ಮತ್ತೊಂದೆಡೆ; ಹೊಟ್ಟೆಗೂ ಆನಂದ, ಮನಸ್ಸಿಗೂ ಉಲ್ಲಾಸ. ಹಬ್ಬವೆಂದರೆ ಇದಲ್ಲವೇ..!

ಪಟಾಕಿಗಳು ಹಿರಿಯರು-ಕಿರಿಯರು ಎಂಬ ಭೇದವಿಲ್ಲದೆ, ಎಲ್ಲರಲ್ಲೂ ಸಂತಸ-ಹರುಷ ತರುವಂಥವು. ಪಟಾಕಿ ಸಿಡಿಸುವುದರಿಂದ ಹೊರಹೊಮ್ಮುವ Sulphur dioxide ಅನಿಲವು ವರ್ಷದ ಈ ಋತುವಿನಲ್ಲಿ ಪರಿಸರದಲ್ಲಿರುವ ಸಾಂಕ್ರಾಮಿಕ ರೋಗಗಳನ್ನು ಹರಡಬಹುದಾದ ಸೊಳ್ಳೆಗಳಂಥಹ ಅಪಾಯಕಾರಿ ಕೀಟಗಳನ್ನು ನಾಶಪದಿಸುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ, ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾದಲ್ಲಿ, Sulphur dioxide ಅನಿಲವು ಮಾನವರಾದ ನಮಗೂ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಸುದ್ದಿ ಮಾಧ್ಯಮಗಳು ಈ ವರ್ಷ ಬೆಂಗಳೂರಿನಲ್ಲಿ ದೀಪಾವಳಿ ಪ್ರಯುಕ್ತದ ವಾಯು ಹಾಗೂ ಶಬ್ಧ ಮಾಲಿನ್ಯಗಳು ಕಳೆದ ವರ್ಷಕ್ಕಿಂತ ಕಡಿಮೆ ಎಂದು ಅಂಕಿ-ಅಂಶಗಳ ಮೂಲಕ ಪ್ರತಿಪಾದಿಸಿದವು. ಇದು ಮೇಲ್ನೋಟಕ್ಕೆ ಸರಿಯೆನಿಸಿದರೂ ಸಹ, ಎಡೆಬಿಡದೆ ಸುರಿದ ಮಳೆಯಿಂದಾಗಿ ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವವರ ಸಡಗರಕ್ಕೆ ಕಡಿವಾಣ ಬಿದ್ದಿದ್ದಂತೂ ಸತ್ಯ.

ಇವೆಲ್ಲಕ್ಕಿಂತ ಮುಖ್ಯವಾಗಿ, ಈ ಪಟಾಕಿಗಳು ತಂದೊಡ್ಡುವ ಗಂಡಾಂತರಗಳು ಅಷ್ಟಿಷ್ಟಲ್ಲ. ಕಳೆದ ವಾರ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗಳಾಗಿ ಚಿಕಿತ್ಸೆ ಪಡೆದವರ ಸಂಖ್ಯೆ 40 ಎಂದು ಮಿಂಟೋ ಕಣ್ಣಾಸ್ಪತ್ರೆ ಮೂಲಗಳು ತಿಳಿಸಿವೆ. ಅದರಲ್ಲೂ, ಮೂವರು ಪುಟ್ಟ ಬಾಲಕರ ಸ್ಥಿತಿ ಗಂಭೀರವಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಗಳೂ ಇವೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ದುರಾದೃಷ್ಟವೆಂದರೆ, ಈ ಮೂರೂ ಬಾಲಕರ ದೃಷ್ಟಿ ಊನಗೊಳಿಸಿದ್ದು  ಇತರರು ಸಿಡಿಸಿದ ಪಟಾಕಿಗಳು. ನಾವು ಎಷ್ಟೇ ಎಚ್ಚರಿಕೆಯಿಂದ ಪಟಾಕಿ ಸಿಡಿಸಿದರೂ ಸಹ, ಅವುಗಳಿಂದ ಆಗಬಹುದಾದ ಅನಾಹುತಗಳು ಊಹಿಸಲಸಾಥ್ಯ. ಈ ಬಾಲಕರು ದೃಷ್ಟಿ ಕಳೆದುಕೊಂಡಲ್ಲಿ ಬೃ.ಬೆಂ.ಮ.ಪಾ. ಮೇಯರ್ ನಿಧಿಯಿಂದ ತಲಾ 50 ಸಾವಿರ ರುಪಾಯಿಗಳನ್ನು ಪರಿಹಾರ ಧನವಾಗಿ ನಿಡಲಾಗುವುದೆಂದು ಘೋಷಿಸಿದ್ದರೂ ಸಹ, ಅದು ಕಮರಿಹೋದ ಬಾಳಿನ ಬೆಳಕನ್ನು ಮತ್ತೆ ಬೆಳಗಿಸಲಾರದೆಂಬುದು ವಾಸ್ತವ.

ಪಟಾಕಿಗಳಿಂದ ಇಂಥಹ ಎಷ್ಟೋ ಅಮಾಯಕ ಜೀವಗಳು ತಮ್ಮ ದೃಷ್ಟಿ ಕಳೆದುಕೊಂಡು, ಕತ್ತಲೆಯನ್ನೇ ದಿಟ್ಟಿಸಿಕೊಂಡು ಜೀವನ ಸಾಗಿಸುವಂತಾಗಿರುವುದು ದುಖದ ಸಂಗತಿ. ಬೆಳಕಿನ ಈ ಹಬ್ಬವು ಹಲವರ ಬದುಕನ್ನು ಶಾಶ್ವತವಾಗಿ ಕತ್ತಲೆಗೆ ದೂಡಿರುವುದು ದುರಂತ. ದೀಪಾವಳಿ ಹಬ್ಬಾಚರಣೆಯಲ್ಲಿ ಪಟಾಕಿಗಳು ಅನಿವಾರ್ಯವೇ? ದೃಷ್ಟಿ ಕಳೆದುಕೊಂಡವರ ಬಾಳಿನ ಶೋಕಕ್ಕೆ ಸಾಂತ್ವಾನ ಹೇಳುವವರ್ಯಾರು? ಕತ್ತಲಾವರಿಸಿದ ಬದುಕಿಗೆ ಬೆಳಕು ನೀಡುವವರ್ಯಾರು? ನಯನವಿಲ್ಲದೆ ಕಳೆಗುಂದಿದ ಮುಖದಲ್ಲಿ ನಗುವಿನ ರೇಖೆ ಮೂಡಿಸುವವರ್ಯಾರು?

Sunday, November 7, 2010

My Marriage @ 50

Courtesy - Google Images

Have you ever heard of someone getting married at 50? Well, I boldly say am getting married @ 50! Wondering what would be the fate of the girl who is getting married to me? Please wait.. there are still a couple of decades left for me to get 50 years old. For now, with this writeup, the number of posts in my Blog hit the 50 mark. And, at this 50, am pleased to announce that the wedding bells are gonna ring for me and my fiancee.

It was nothing than just a co-incidence, that I got an opportunity to write about our Marriage at the 50th Blog Post. It indeed is a very contented feeling after I started Blogging and needless to mention that this contentment is just because of all my readers, who have been supporting me right from the word go by their invaluable and encouraging comments and views on my thoughts.

I take this opportunity to personally thank every one of my readers for shaping up this Blog of mine to what it actually is today. Also, this Blog has created a bridge of virtual friendship with many intellects, otherwise to whom I would have just been a passing-by stranger. Many of my friends are also here to extend their unconditional support to me as they have been doing from my childhood, I thank them too. Overall, it is a very pleasant experience for me to Blog, thank you all for making it so.

About our Marriage, aaaahh; it is just the same thing that happens in any individual's life. But, it really is a great achievement I should say if given an opportunity to get married to someone we cannot live without. To find such someone is also very important; am glad that Veena found Prashanth or Prashanth found Veena or the Almighty made us to meet - all are equally true.

While getting married with the graceful blessings of God and our Parents on Sunday, the 28th November 2010, we would like to have the pleasure of your presence with family & friends on this auspicious occasion. Please consider this as our personal invitation and do come to bless us.

Please visit Our Wedding Website for further information. Thank you!

Wednesday, November 3, 2010

ಗುಬ್ಬಚ್ಚಿ ಗೂಡಿನಲ್ಲಿ..

"ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ..
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ..
ಇಂಥ ನೂರು, ಆಸೆ ಯಾರು, ತಂದೋರು ಈ ಪ್ರೀತಿಲೀ ಹೇ ಯೇ.."

ಕನ್ನಡದ 'ಬಿಂದಾಸ್' ಚಿತ್ರದಲ್ಲಿ ಮೂಡಿಬಂದಿರುವ ಗುರುಕಿರಣ್ ರವರ ಈ ಹಾಡು ಬಹಳ ಸಮಯ ನಮ್ಮ ಪಡ್ಡೆ ಹುಡುಗರ ಮನದಲ್ಲಿ ನಲಿದಾಡಿದ್ದಂತೂ ನಿಜ! ಇಂದಿಗೂ ಸಹ ನಾವು ಬೆಂಗಳೂರಿನ ಯಾವುದೇ FM ತರಂಗಾಂತರದಲ್ಲಿ ಹಾಡುಗಳನ್ನು ಕೇಳುತ್ತಿದ್ದರೆ, ಕನಿಷ್ಟ ದಿನಕ್ಕೊಂದು ಬಾರಿಯಾದರೂ ಈ ಹಾಡನ್ನು ಪ್ರಸಾರ ಮಾಡದೆ ಇರಲಾರರು. ಈ ಹಾಡನ್ನು ಕೇಳಿದಾಗಲೆಲ್ಲಾ ನನಗೆ ನನ್ನ ಬಾಲ್ಯದ ದಿನಗಳು ನೆನಪಾಗಿ, ನನ್ನ ಕಣ್ಮುಂದೆ 'ಗುಬ್ಬಚ್ಚಿ'ಗಳೇ ಬಂದುಬಿಡುತ್ತವೆ!

House Sparrow (Image © 'Birds Amore')
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬಿಂದಾಸ್ ಚಿತ್ರದ ಹಾಡನ್ನು ಕೇಳಿದಮೇಲೆಯೇ ನನಗೆ ಮತ್ತೆ ಗುಬಚ್ಚಿಗಳ ನೆನಪಾದದ್ದು! ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಬೆಂಗಳೂರು ನಗರ-ಜೀವನದ ಅವಿಭಾಜ್ಯ ಅಂಗದಂತಿದ್ದ ಈ ಪುಟ್ಟ ಗುಬ್ಬಚ್ಚಿಗಳು ಇಂದು ಇನ್ನಿಲ್ಲದಂತೆ ಕಾಣೆಯಾಗಿಹೋಗಿವೆ ಎಂಬ ವಿಷಯ ಆಘಾತಕಾರಿಯಾದರೂ, ಕಟುಸತ್ಯ. ಎಲ್ಲಿ ಹೋದವು ಈ ಗುಬ್ಬಿಗಳು? ಇಂದು ಇವುಗಳನ್ನು ನಮ್ಮ ಬೆಂಗಳೂರಿನ ಪರಿಸರದಲ್ಲಿ ಹುಡುಕುವ ನನ್ನ ಪ್ರಯತ್ನ ಫಲಕಾರಿಯಾಗಲಿಲ್ಲ ಎಂದು ಬೇರೆ ನಿಮಗೆ ಹೇಳಬೇಕಾದ ಅವಶ್ಯಕತೆಯಿಲ್ಲ!

ಚೆನ್ನಾಗಿ ನೆನಪಿದೆ, ನಾನು ಚಿಕ್ಕವನಿದ್ದಾಗ ಮನೆಯ ಸುತ್ತೆಲ್ಲಾ ಈ ಗುಬ್ಬಿಗಳದ್ದೇ ಕಾರುಬಾರು. ಅಕ್ಕಿಯಿಂದ ಆಯ್ದ ಭತ್ತಗಳನ್ನು ಅಮ್ಮ ಕೆಳಗೆ ಹಾಗುವುದೇ ತಡ, ನಾ ಮುಂದು ತಾ ಮುಂದು ಎಂದು ಗುಂಪು-ಗುಂಪಾಗಿ ಬಂದು ತಂತಮ್ಮಲ್ಲೇ ಸ್ಪರ್ಧೆಗಿಳಿದುಬಿಡುತ್ತಿದ್ದವು ಗುಬ್ಬಿಗಳು. ಮಹಡಿಯ ಮೇಲೆ ಅಥವಾ ಸಜ್ಜದ ಮೇಲೆ ಕಾಳುಗಳನ್ನು ಬಿಸಿಲಿನಲ್ಲಿ ಒಣಗಿಸಲು ಹಾಕಿದೆವೆಂದರೆ ಮುಗಿದೇ ಹೋಯಿತು, ಕೋಲು ಹಿಡಿದ ಕಾವಲುಗಾರರಿಲ್ಲದ ಹೊರೆತು ಇವುಗಳ ಹಾವಳಿ ಹೇಳತೀರದು. ಗುಬ್ಬಿಗಳಿಗೆ ಧಾನ್ಯವೇ ಬೇಕು ಎಂದೇನೂ ಇರಲಿಲ್ಲ; ಕೆಲವೊಮ್ಮೆ ಅಲ್ಲಲ್ಲಿ ಚೆಲ್ಲಿರುತ್ತಿದ್ದ ಅನ್ನವನ್ನು ಹೆಕ್ಕಿ ತಮ್ಮ ಗೂಡಿನಲ್ಲಿರುವ ಮುದ್ದು ಕಂದಮ್ಮಗಳಿಗೆ ನೀಡುತ್ತಿದ್ದ ದೃಶ್ಯವನ್ನು ನೋಡಿಯೇ ಕಣ್ತನಿಯಬೇಕು.

ದಿನಗಳು ಕಳೆದಂತೆ, ಬೆಂಗಳೂರು ನಗರವು ಮಿತಿಮೀರಿ ಬೆಳೆಯುತ್ತಲೇ ಇದೆ. ಅಂಗೈ ಅಗಲದ ಭೂಮಿಗೆ 'ಚಿನ್ನ'ದ ಬೆಲೆ! ಹಸಿರು ಮರಗಳನ್ನು ಉರುಳಿಸಿ ಎದ್ದು ನಿಂತಿರುವ 'ಕಾಂಕ್ರೀಟ್ ಕಾಡು'ಗಳು. 'ಶೆಟ್ಟರ' ಅಂಗಡಿಗಳನ್ನು ಮೂಲೆಗುಂಪಾಗಿಸಿರುವ 'ಮಂತ್ರಿ ಮಾಲ್'ಗಳು. BMTC ಬಸ್ಸುಗಳಿಗೆ ಬ್ರೇಕ್ ಹಾಕಲು ಬರುತ್ತಿರುವ 'ನಮ್ಮ ಮೆಟ್ರೋ' ರೈಲುಗಳು. ಬೆಣ್ಣೆ ಗುಲ್ಕನ್ ರುಚಿಯನ್ನು ಮರೆಸುತ್ತಿರುವ 'ಪಿಜಾ-ಬರ್ಗರ್'ಗಳು. ಕಾಲುದಾರಿಗಳನ್ನು ಅಲಂಕರಿಸುತ್ತಿರುವ 'ಫ್ಲಯ್ ಓವರ್'ಗಳು. ಬೈಸಿಕಲ್ ಗಳನ್ನು ತುಕ್ಕು ಹಿಡಿಸಿರುವ 'ಬೈಕ್'ಗಳು. ಹಿತವಾದ ತಂಗಾಳಿಯನ್ನು ಕೆಡಿಸಿರುವ 'ವಿಷಕಾರಕ ಅನಿಲ'ಗಳು. ಸಿಹಿಯಾದ ನಿದ್ದೆ ಕೆಡಿಸಿರುವ 'ನೈಟ್ ಶಿಫ್ಟ್'ಗಳು. ಇವೆಲ್ಲವುಗಳನ್ನು ಅರಗಿಸಿಕೊಳ್ಳಲು ಮನುಷ್ಯರಾದ ನಾವೇ ಹೆಣಗಾಡುತ್ತಿರುವಾಗ, ಪಾಪ ಆ ಪುಟ್ಟ ಪಕ್ಷಿಗಳು ಹೇಗೆ ತಾನೇ ಸಹಿಸಿಕೊಂಡಾವು? ಬೆಂಗಳೂರಿನ ತಮ್ಮ ಗೂಡುಗಳನ್ನು ಬಿಟ್ಟ ಗುಬ್ಬಿಗಳು ಶಾಶ್ವತವಾಗಿ ಹೊರಟೇಹೋದವು, ಹಿಂತಿರುಗಿ ಬರಲು ದಾರಿ ತಿಳಿಯದಷ್ಟು ದೂರ..